ವಿಶ್ವದ ಅತಿ ಶ್ರೇಷ್ಠ ವಾಗ್ಮಿ ಸುಜಿತ್ ಲಾಲ್ವಾನಿ ಕುಂದಾಪುರಕ್ಕೆ ಭೇಟಿ ನೀಡಲಿದ್ದಾರೆ.

ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯ ಪ್ರಾಯೋಜಿಸಿರುವ ಕುಂದಾಪುರದ ಸರಸ್ವತಿ ಗ್ರೂಫ್ ಆಫ್ ಇನ್‌ಸ್ಟಿಟ್ಯೂಟ್ ಮತ್ತು ಅಕ್ಷಯ ಕೋಚಿಂಗ್ ಸೆಂಟರ್ ಆಶ್ರಯದಲ್ಲಿ ಕುಂದಾಪುರದ ಭಂಡಾರ್‌ಕಾರ್ಸ್‌ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲಿರುವರು.
      36 ಮೀಲ್ಸ್ ಎನ್‌ಜಿಓ ಸಂಸ್ಥೆ ಹುಟ್ಟುಹಾಕಿ ಹಸಿದ ಲಕ್ಷಾಂತರ ಮಂದಿಗೆ ಆಹಾರ ಪೂರೈಕೆಯ ಕನಸು ಕಂಡ ಲಾಲ್ವಾನಿ ಯುವಜನಾಂಗಕ್ಕೆ ಮಾದರಿಯಾಗಿದ್ದಾರೆ. ಐಯು ಮ್ಯಾಗ್‌ಜಿನ್‌ನ ಸಂಪಾದಕರಾಗಿರುವ ಸುಜಿತ್ 120 ದೇಶಗಳಲ್ಲಿ ಓದುಗರನ್ನು ಹೊಂದಿದ್ದಾರೆ. ಮಧ್ಯಾಹ್ನ 1.30ರಿಂದ 3.30ರ ತನಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿರುವ ಅವರು ಸಂಜೆ 4ರಿಂದ ಉದ್ಯೋಗಸ್ಥರು, ವ್ಯವಹಾರಸ್ಥರನ್ನು ಉದ್ದೇಶಿಸಿ ಮಾತನಾಡಲಿರುವರು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಬರೆಯಿರಿ