ಇಂತಹ ಪ್ರಯೋಗಗಳು ಯಕ್ಷಗಾನಕ್ಕೆ ಪೂರಕವಾಗಿ ನಡೆದು ಕಲೆಗೆ ಇನ್ನೂ ಹೆಚ್ಚಿನ ಬೆಲೆ ಬರಲಿ ಎಂದ ಅವರು ತಂತ್ರಜ್ಞಾನ ಬಳಕೆ ಮತ್ತು ಮಕ್ಕಳಿಗಾಗಿ ಅದರ ಉಚಿತ ಪ್ರದರ್ಶನ ಆಯೋಜನೆಯ ಬಗೆಗೆ ಪ್ರಶಂಸೆಯ ಮಾತುಗಳನ್ನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪಿಂಗಾರ ಪತ್ರಿಕೆಯ ಸಂಪಾದಕ ರೇಮಂಡ್ ಡಿಕುನ್ನಾ ತಾಕೋಡೆ ಮಾತನಾಡಿ ಯಕ್ಷಗಾನ ಸೇರಿದಂತೆ ಕಲಾ ಮಾಧ್ಯಮದ ಇತಿಹಾಸದಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಹೇಳಿದರು.
ಯಕ್ಷಗಾನಕ್ಕೆ ಹೊಸ ಮೆರಗು ನೀಡಲು ಮತ್ತು ಇನ್ನಷ್ಟು ಮಂದಿಯನ್ನು ಆಕಷರ್ಿಸಲು ಈ ಪ್ರಯತ್ನ ಎಂದು ಈ ಹೊಸ ಪರಿಕಲ್ಪನೆಯನ್ನು ಸಾಕಾರ ಮಾಡಿದ ಸದಾನಂದ ಶೆಟ್ಟಿ ಕಟೀಲು ಅಭಿಪ್ರಾಯಪಟ್ಟರು.
ಎನಿಮೇಶನ್ ತಂತ್ರಜ್ಞ ಸಂತೋಷ್ ಶೆಟ್ಟಿ ಕಟೀಲ್, ಭವ ಚಿತ್ರದ ನಿಮರ್ಾಪಕ- ನಿದರ್ೇಶಕ ಪ್ರಕಾಶ್ ಕಾಬೆಟ್ಟು, ಅಮರಶ್ರೀ ಟಾಕೀಸಿನ ವ್ಯವಸ್ಥಾಪಕ ಜೆರಾಲ್ಡ್ ಕುಟಿನೋ ಅತಿಥಿಗಳಾಗಿದ್ದರು.
ಸಂಘಟಕ ಶೇಖರ ಅಜೆಕಾರು ಸ್ವಾಗತಿಸಿದರು. ಶಿಕ್ಷಕಿ ಆಶಾಲತಾ ಕಾರ್ಯಕ್ರಮ ನಿರೂಪಿಸಿದರು. ಸೌಮ್ಯ ಶ್ರೀ ಎಸ್ ಅಜೆಕಾರು ವಂದಿಸಿದರು.
ವಿವಿಧ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಪ್ರಕಾಶ್ ಸುವರ್ಣ ಕಟಪಾಡಿ ಅವರ ಭಾಗ್ಯ ಮತ್ತು ಬಿಡುಗಡೆಗೊಂಡ ಯಕ್ಷಗಾನವನ್ನು ದೊಡ್ಡ ಪರದೆಯಲ್ಲಿ ಉಚಿತವಾಗಿ ಪ್ರದಶರ್ಿಸಲಾಯಿತು.
ನಿಮ್ಮ ಪ್ರತಿಕ್ರಿಯೆ ಬರೆಯಿರಿ ಕುಂದಾಪ್ರ.ಕಾಂ> editor@kundapra.com