
ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಉಪ್ಪಿನಕುದ್ರು ಶ್ರೀ ಗೋಪಾಲಕೃಷ್ಣ ದೇವಳದ ವಠಾರದಲ್ಲಿ ನಡೆದ ಹಳ್ಳಿಯತ್ತ ಸಾಹಿತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಯಲ್ಲಿ ಕಲಿತರೆ ಜ್ಞಾನ - ಸ್ಥಾನ ಸಿಗದು ಎಂಬ ಅಳುಕು ಬೇಡ ಎಂದ ಅವರು ಇಂದು ಉನ್ನತ ಸ್ಥಾನದಲ್ಲಿರುವ ಗಣ್ಯರೆಲ್ಲರೂ ಅವರವರ ಮಾತೃಭಾಷೆಯಲ್ಲಿಯೇ ಕಲಿತವರು ಎಂದು ವಿವರಿಸಿದರು.
ಕನ್ನಡ ಭಾಷೆಯಲ್ಲಿ ಕಲಿತರೆ ಜ್ಞಾನ - ಸ್ಥಾನ ಸಿಗದು ಎಂಬ ಅಳುಕು ಬೇಡ ಎಂದ ಅವರು ಇಂದು ಉನ್ನತ ಸ್ಥಾನದಲ್ಲಿರುವ ಗಣ್ಯರೆಲ್ಲರೂ ಅವರವರ ಮಾತೃಭಾಷೆಯಲ್ಲಿಯೇ ಕಲಿತವರು ಎಂದು ವಿವರಿಸಿದರು.

ಉಪ್ಪಿನಕುದ್ರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಶ್ರೀಲತಾ, ಸಂದೇಶ್ ಸ್ವರಚಿತ ಕವನಗಳನ್ನು ವಾಚಿಸಿದರು. ಸುಗಮ ಸಂಗೀತಗಾರ ಗಣೇಶ್ ಗಂಗೊಳ್ಳಿ, ಚಂದು ಮತ್ತು ಗೌರಿ ಸಹೋದರಿಯರು, ಹಿರಿಯರಾದ ಸರೋಜಿನಿ ಮತ್ತು ವೊೈದು ಜನಪದ ಹಾಡುಗಳನ್ನು ಹಾಡಿ ರಂಜಿಸಿದರು.
ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಗೌರವ ಕಾರ್ಯದರ್ಶಿ ಕೆ.ಜಿ.ವೈದ್ಯ ಪರಿಷತ್ನ ಕಾರ್ಯಗಳನ್ನು ವಿವರಿಸಿದರು. ಅಧ್ಯಕ್ಷ ಕುಂದಾಪುರ ನಾರಾಯಣ ಖಾರ್ವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯ ಯು.ವೆಂಕಟರಮಣ ಹೊಳ್ಳ ಸ್ವಾಗತಿಸಿ ನಿರೂಪಿಸಿದರು. ಶ್ರೀ ಗೋಪಾಲಕೃಷ್ಣ ದೇವಳದ ಧರ್ಮದರ್ಶಿ ಭಾಸ್ಕರ ಕಾರಂತ ಗಣ್ಯರಿಗೆ ಫಲತಾಂಬೂಲಯಿತ್ತು ಗೌರವಿಸಿದರು.
ಉದ್ಯಮಿಗಳಾದ ಯು. ರಮೇಶ್ ಕಾರಂತ, ಯು. ಸದಾನಂದ ಸೇರುಗಾರ ಮತ್ತು ಉಪ್ಪಿನಕುದ್ರು ನೇತಾಜಿ ಕಮಿಟಿ ಫ್ರೆಂಡ್ಸ್ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಚಾಲಕ ಯು. ವೆಂಕಟರಮಣ ಹೊಳ್ಳ ವಂದಿಸಿದರು.