ನಮ್ಮ ದೃಶ್ಯ ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್, ಅತಿರಂಜಕತೆ, ರೋಚಕತೆ ಮುಂತಾದ ಟಿಆರ್ಪಿ ಹೇಚ್ಚಿಸಿಕೊಳ್ಳವ ತಂತ್ರಗಳನ್ನು ಅಳವಡಿಸಿಕೊಂಡು ಪತ್ರಿಕೋದ್ಯಮದ ಮೂಲವ್ಯಾಖ್ಯೆಯನ್ನೇ ಬದಲಿಸಲು ಹೊರಟಿರುವುದು ನಿಜ. ಇದೇ ಕಾರಣದಿಂದ ಬುದ್ದಿಜೀವಿಗಳು ಮಾಧ್ಯಮ ಮಂದಿಯನ್ನು ಜರಿಯುತ್ತಿರುತ್ತಾರೆ. ಅದೇನೊ ಸರಿನೇ ಬಿಡಿ. ಆದರೆ ಇವೆಲ್ಲವುಗಳನ್ನು ಮೀರಿ ವಸ್ತುನಿಷ್ಠ ವರದಿ ಮಾಡಿ ತನ್ನ ಕರ್ತವ್ಯ ನಿರ್ವಹಿಸುವ ಮಾಧ್ಯಮ ಮಂದಿಯ ಮೇಲೆ ವಿನಾಕಾರಣ ಹಲ್ಲೆ ನಡೆಸುವ, ಆರೋಪ ಹೊರಿಸುವ ಹುನ್ನಾರ ನಡೆಯುತ್ತಲೇ ಇವೆಯಲ್ಲ ಇದೇಷ್ಟು ಸರಿ? ಪ್ರತಿದಿನವೂ ಅಧಿಕಾರಶಾಹಿಗಳು, ಭ್ರಷ್ಟಾಚಾರಿಗಳು ಮಾಧ್ಯಮ ಮಂದಿಗೆ ನೀಡುವ ಕಿರುಕುಳಗಳ ವಿರುದ್ಧ ನಾವುಧ್ವನಿ ಏತ್ತುವುದೆಂದು?
ಹೀಗೆ ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಿದ ಸುದ್ದಿ ವಾಹಿನಿಯೊಂದರ ವರದಿಗಾರ ಪರಶುರಾಮ್ ತಹಸೀಲ್ದಾರ್ ಮನದಾಳದ ಮಾತುಗಳು ಇಲ್ಲಿದೆ. ಓದಿ ಪ್ರತಿಕ್ರಿಯಿಸಿ. ಮುಂದೆ ಓದಿ...
ಇದು ಕೇವಲ ಒಬ್ಬ ಪತ್ರಕರ್ತನ ಕಥೆಯಲ್ಲ. ಪ್ರತಿಯೊಬ್ಬ ಪತ್ರಕರ್ತನ ಬದುಕಿನಲ್ಲಿ ಇಂತಹ ಸನ್ನಿವೇಶಗಳು ಎದುರಾಗುತ್ತಿರುತ್ತವೆ.