ಕುಂದಾಪ್ರ ಕನ್ನಡ ಕವಿತೆ: ನಮ್ಮೂರ್ 'ಕೊಡಿ ಹಬ್ಬ'

ಕೊಡಿ ಹಬ್ಬದ ಅಂಗವಾಗಿ ಕುವೈತನಲ್ಲಿ ನೆಲೆಸಿರುವ ನೇರಂಬಳ್ಳಿಯ ಸುರೇಶ್ ಶ್ಯಾಮ್ ರಾವ್ ಬರೆದ ಕುಂದಾಪ್ರ ಕನ್ನಡ ಕವಿತೆ.


ಕೋಟ್ಸುರ್ದ ಜನ ಚೆಂದೊ, ನಮ್ಮೂರ್ ಪ್ಯಾಟಿ ಚೆಂದೊ|
ಕುಂದಾಪ್ರ ಕನ್ನಡ ಚೆಂದೊ, ಕೋಟಿಲಿಂಗೇಶ್ವರನೆ ಚೆಂದೊ|
ನಮ್ಮೂರ್ 'ಕೊಡಿ ಹಬ್ಬ' ಕಾಂಬುಕೆ ಚೆಂದವೋ ಚೆಂದೊ||

ಹಬ್ದ ದಿವ್ಸ ಈಸ್ವರ್ನ ಮೂತರ್ಿ ತೇರ್ ಹತ್ತ್ಕಾರೆ ಮೊದ್ಲೆ|
ಹಳವಳ್ಳಿ ಸಮುದ್ರದ್ ಕಡಿನಾಗೆ ಮೀಸ್ಕಂಡ್ ಬರಕ್ ಅಂಬ್ರಲೆ||

ಎರ್ಡು ಬದಿಯಂಗೆ ಸೇಟ್ರ ಮ್ಯಾಮಿ ಮಿಠಾಯಿ ಅಂಗಡಿ ಸಾಲ್|
ತೇರಿನ್ ಎದ್ರಂಗೆ ಕೊರ್ರರ್ ಕೋಟಿ ಬಡು ಚರ್ಮದ ಡೋಲ್||

ಪ್ಯಾಂ, ಪೂಂ ಅಂಬು ಪುಗ್ಗಿ, ಕೊಳಲ್, ಮಕ್ಕಳ್ ಮರಿ ಹಿಂಡ್|
ಐದ್ರೂಪಾಯಿಗ್ ಮೂರಂಬ್ರು ಕಾಣಿಯೆ ಹಣಿ ಕಣ್ಣಿನ ಬೆಂಡ್||

ಕ್ಯೊಂ, ಕ್ಯುಂಯಿ ಅಂಬು ತಿರ್ಗು ತೊಟ್ಲ್ ಹತ್ಕಂಡ್ ಕೂಕಂಡೆ|
ಮ್ಯಾಲ್ ಹೋಯಿ ಕೆಳಗ್ ಬಪ್ಪೊತ್ತಿಗ್ ಹೊಟ್ಟ್ಯಾಗ್ ಚೆಂಡೆ||

ತೇರಿನ್ ತುಂಬ ಕಟ್ಟ್ತ್ರಲೆ ಬಿಳಿ, ಕೆಂಪ್ ಬಣ್ಣ್ಬಣ್ಣ್ದ ಪತಾಕಿ|
ಗನರ್ಾಲ್ ಸಾಯಿಬ್ರ ಹ್ವೊಡ್ಸು ಪುಸ್ಕ್ಪುಸ್ಕಂಬು ಗನರ್ಾಲ್ ಪಟಾಕಿ||

ಮುಂದ್, ಮುಂದೆ ಬಪ್ಪು ತಟ್ಟಿರಾಯ ಕ್ವಣುದೇನ್ ಚೆಂದೊ ಕಾಣಿ|
ಹಿಂದ್, ಹಿಂದೆ ಬಂತ್ ಕಾಂಬ್ರಲೆ ಹ್ವೊರಿ ಅಕ್ಕಿ, ಕಾಯಿ, ಹಸ್ರಾಣಿ||

ಅಷ್ಟ್ ದೊಡ್ಡ್ ಬ್ರಹ್ಮ ರಥೊ ಎಳುಕ್ ಬಂದ್ ಜನಾ ಆರು ಎಷ್ಟೆ?|
ಅಡಿಗ್ಯಾವನಾರು ಬಿದ್ದಾಂಗಾರೆ ಕಥಿ-ಕೈಲಾಸ ಅವನ್ ಕತಿ ಅಷ್ಟೆ!!

ಹೊತ್ತಿಗ್ಮುಂಚೆ ಹ್ವೊಸ್ ಮದ್ಮಕ್ಳ್ ಕೋಟಿತೀರ್ಥದಗ್ ಮಿಯ್ಕಂಬ್ರು|
ಮಿಂದ್ರ್ ಮ್ಯಾಲೆ ದುಡ್ಡ್ಸುತ್ತಕ್ಕಿ ಚೆಲ್ಲಿ, ಕೊಡಿ ತಕಂಡ್ ಬರ್ಕಂಬ್ರು||
                                           
ರಥ, ಪತಾಕಿ ಕಟ್ಟು ಕೆಲ್ಸ, ದೀವಟ್ಗಿ ಸಲಾಮ್ ಎಲ್ಲ ಸಾಯಿಬ್ರದಂಬ್ರು |
ಜಾತಿ, ಮತ, ಧರ್ಮದ್ ಬೇಧ-ಭಾವ ನಮ್ಗಿಲ್ಲ ಅಂದ್ ಹೇಳಿರಂಬ್ರು||

ಪಡು-ಮೂಡ್, ತೆಂಕ್ಲಾಯಿ-ಬಡ್ಕಾಯಿ ದೇವ್ರ್ ಸವಾರಿ ಉತ್ಸವ ಚೆಂದೊ|
ದೃಷ್ಟಿ ತೆಗುದ್, ದೇವ್ರ್ ಬಲಿ ಉತ್ಸವ, ಓಕುಳಿ ಉತ್ಸವ ಆಡುದೆ ಚೆಂದೊ||
ಸುರೇಶ್ ಶ್ಯಾಮ್ ರಾವ್ ನೇರಂಬಳ್ಳಿ,
ಕುವೈತ