
ಪಟ್ಟಿಯ ಸಾಲಿನಲ್ಲಿ ಭಾರತಕ್ಕೆ 87ನೇ ಸ್ಥಾನ ಲಭಿಸಿರುವುದು ನೋಡಿದರೆ ನಾಚಿಗೇಡಿನ ವಿಷಯ ಎಂದು ವಿಷಾದಿಸಿದರು.
ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ಹಂಗಳೂರು ಸೈಂಟ್ ಫಿಯುಸ್ ಇಗರ್ಜಿ ಧರ್ಮಗುರು ಜಾನ್ ವಾಲ್ಟರ್ ಮೆಂಡೋನ್ಸಾ, ಇಗರ್ಜಿಯ ಆಡಳಿತ ಮಂಡಳಿ ಉಪಾಧ್ಯಕ್ಷ ಫಿಲಿಪ್ ಫರ್ನಾಂಡೀಸ್, ಕಾರ್ಯದರ್ಶಿ ಲೀನಾ ಡಿಸೋಜ, ತಾಲೂಕು ಪಂಚಾಯಿತಿ ಸದಸ್ಯ ಮಂಜು ಬಿಲ್ಲವ, ಇಗರ್ಜಿ ಆಡಳಿತ ಮಂಡಳಿ ಮಾಜಿ ಉಪಾಧ್ಯಕ್ಷ ಮೊಂತು ಫರ್ನಾಂಡೀಸ್, ಉದ್ಯಮಿ ಜಯಕರ ಶೆಟ್ಟಿ, ಶಾಲೆಯ ಸಂಚಾಲಕಿ ಸಿಸ್ಟರ್ ಲೊರೆನ್ಜಾ ಡಿಸೋಜ, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಡಾ.ಸಿಲ್ವಿನಾ ವಾಜ್ ಉಪಸ್ಥಿತರಿದ್ದರು. ಸಿಸ್ಟರ್ ಸರೀನಾ ಸ್ವಾಗತಿಸಿದರು. ಶಾಂತಿ ಮತ್ತು ಉಷಾ ಕಾರ್ಯಕ್ರಮ ನಿರ್ವಹಿಸಿದರು. ಫಾತಿಮಾ ವಂದಿಸಿದರು.