ನವೀಕ್ರತ ಕ್ರೈಸ್ತ್ ಕಿಂಗ್ ಚರ್ಚ್ ಉದ್ಘಾಟನೆ


ಕುಂದಾಪುರ: ತ್ರಾಸಿಯ ಕ್ರೈಸ್ತ್ ಕಿಂಗ್ ನವೀಕ್ರತಗೊಂಡ ಚರ್ಚ್ ನ್ನು ಉಡುಪಿಯ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂದನೀಯ ಡಾ.ಜೆರಾಲ್ಡ್ ಐಸಾಕ್ ಲೋಬೊ ಉದ್ಘಾಟಿಸಿದರು. 
       ಈ ಸಂದರ್ಭದಲ್ಲಿ ತ್ರಾಸಿ ಚರ್ಚ್ ಧರ್ಮಗುರು ವಂದನೀಯ ಅನೀಲ್ ಕಾರ್ನಾಲಿಯೋ, ಉಪಾಧ್ಯಕ್ಷ ರಾಬರ್ಟ್ ಒಲಿವೇರ, ಕಾರ್ಯದರ್ಶಿ ಡಾಲ್ಫಿ ಫೆರ್ನಾಂಡಿಸ್ ವಂದನೀಯ ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರನ್ನು ಆದರದಿಂದ ಸ್ವಾಗತಿಸಿದರು.

        ಚರ್ಚ್ ನ ವತಿಯಿಂದ ವಂದನೀಯ ಡಾ.ಜೆರಾಲ್ಡ್ ಐಸಾಕ್ ಲೊಬೊ ಅವರನ್ನು ಚರ್ಚ್ ನ ಧರ್ಮ ಗುರುಗಳು ಸನ್ಮಾನಿಸಿದರು.
 ಕುಂದಾಪುರ ತಾಲೂಕಿನ ಚರ್ಚ್ ಗಳ ಧರ್ಮಗುರುಗಳು ಉಪಸ್ಥಿತರಿದ್ದರು.