ಇತಿಹಾಸ ಪ್ರಸಿದ್ಧ ವಂಡಾರು ಕಂಬಳ

     ಉಡುಪಿ ಜಿಲ್ಲೆಯಲ್ಲೇ ಪ್ರಸಿದ್ದವಾದ ವಂಡಾರು ಕಂಬಳ ಇಲ್ಲಿನ ಸುಮಾರು 5 ಎಕ್ರೆಗೂ ಜಾಸ್ಥಿ ವಿಸ್ತೀರ್ಣದ ಕಂಬಳ ಗದ್ದೆಯಲ್ಲಿ ನಡೇಯುವ ಕಂಬಳ ಜನರ ಬಾಯಲ್ಲಿ ಮನೆ ಮಾತಗಿದ್ದು ಕಂಬಳಕ್ಕೆ ಬಹಳ ವರ್ಷದ ಇತಿಹಾಸವೂ ಇದೆ. ಬಹಳ ಹಿಂದೆ ಪಾಂಡವರು ಈ ಕಂಬಳ ಗದ್ದೆ ಹಾಗೂ ಕುಂದಾಪುರ ಕೋಟೆಶ್ವರದ ಕೋಟಿತೀರ್ಥ ಪುಷ್ಖರಣಿಯನ್ನು ಒಂದೇ ರಾತ್ರಿ ನಿರ್ಮಿಸಿದ್ದರು. ಅಂದು ರಾತ್ರಿ ತಿನ್ನುವ ಸಲುವಾಗಿ ಹಲಸಿನ ಹಣ್ಣನ್ನು ಸಿಗಿಯಲು ಹೋದ ಸಂದರ್ಭದಲ್ಲಿ ಕೋಳಿ ಕೂಗಿ ಬೆಳಕಾಗುತ್ತಾ ಬಂತು ಅಲ್ಲಿಗೆ ಗದ್ದೆ ನಿರ್ಮಾಣ ನಿಲ್ಲಿಸಿದರು.
 ಅದಕ್ಕೆ ಪುಷ್ಟಿ ನೀಡುವಂತೆ ಈ ಗದ್ದೆ ಸಮೀಪದಲ್ಲೇ ಅರ್ದ ಸಿಗಿದ ಹಲಸಿನ ಹಣ್ಣಿನ ಆಕ್ರತಿಯ ಕಲ್ಲಿನ ಪ್ರತಿಮೆ ಇದ್ದು ಅದನ್ನು ಪಾಂಡವರ ಕಲ್ಲೆಂದು ಕರೆಯುವ ಜನರು ಇಗಲೂ ಅದಕ್ಕೆ ಭಕ್ತಿ ಭಾವದಿಂದ ಪೂಜೆ ಸಲ್ಲಿಸುತ್ತಾರೆ. ಅಲ್ಲದೇ ಕೋಡಿ ಹಬ್ಬದ ದಿನ ವಂಡಾರು ಕಂಬಳ ಗದ್ದೆಯಲ್ಲಿ ದೂಳು ಏಳುತ್ತದೆ ಮತ್ತು ವಂಡಾರು ಕಂಬಳದ ದಿನ ಕೋಟೇಶ್ವರ ಕೋಟಿತೀರ್ಥ ಕೆರೆಯಲ್ಲಿ ಕೆಸರು ಏಳುತ್ತದೆ ಎನ್ನುವ ಮಾತೂ ಇದೆ.

ವಿಶೇಷ ಹರಕೆ: ಇಲ್ಲಿನ ಕಂಬಳದ ದಿನ ಹರಕೆಯ ಪ್ರಾಕಾರಗಳು ನಡೆಯುತ್ತದೆ. ಜಾನುವಾರುಗಳಿಗೆ ಅನಾರೋಗ್ಯ ಬಾರದಂತೆ ಹರಕೆ ಸಲ್ಲಿಸುವ ಕ್ರಮವಿದೆ. ಜಾನುವಾರುಗಳನ್ನು ಇಡೀ ಗದ್ದೆ ಸುತ್ತು ಹಾಕಿಸಿ ಹರಕೆ ಸಲ್ಲಿಸುತ್ತಾರೆ. ಮತ್ತು ತಮ್ಮ ತಮ್ಮ ಮಕ್ಕಳನ್ನು ಗದ್ದೆಗೆ ಇಳಿಸಿ ನೀರಿನ ಪ್ರೋಕ್ಷಣೆ ಮಾಡಿಸುತ್ತಾರೆ. ಜಿಲ್ಲೆಯಾದ್ಯಂತ ಹಲವು ಕಡೆಗಳಿಂದ ಜನರು ಕೋಣಗಳನ್ನು ಕಂಬಳಕ್ಕಾಗಿ ಇಲ್ಲಿಗೆ ತರುತ್ತಾರೆ. ಹಲವರು ಕೋಣಗಳನ್ನು ವಾಧ್ಯ-ಮೇಳಗಳೊಂದಿಗೆ ಕರೆತರುವ ಪದ್ದತಿಯೂ ಇದೆ.ವಿಶೇಷತೆಯೆಂದರೆ ಇಲ್ಲಿ ಯಾವುದೇ ತಂಡ ಹಾಗೂ ಕೋಣಗಳ ಓಟದಲ್ಲಿ ಸ್ಪರ್ಧೆ ಇರುವುದಿಲ್ಲ. ಕೇವಲ ಸಂಪ್ರದಾಯ ಹಾಗೂ ಜಾನಪದ ಕ್ರೀಡೆಯಾಗಿ ಹಿಂದಿನಿಂದಲೂ ಬಂದಂತಹ ಕಂಬಳ ಕ್ರೀಡೆಯನ್ನು ನಡೆಸಲಾಗುತ್ತಿದೆ. ಒಟ್ಟಿನಲ್ಲಿ ಪುರಾತನ ಹಾಗೂ ಗ್ರಾಮೀಣ ಕ್ರೀಡೆಯಾಗಿರುವ ಕಂಬಳವನ್ನು ಹರಕೆ ರೂಪದಲ್ಲಿ ಭಕ್ತಿಭಾವದಿಂದ ಇಲ್ಲಿನ ಜನರು ಆಚರಿಸುತ್ತಾ ಬಂದಿದ್ದಾರೆ. 
       ದೈವದ ನಂಬಿಕೆಯ ಮೂಲಕ ಜಾನುವಾರುಗಳಿಗೆ ಯಾವುದೇ ಕೊರತೆಯಾಗದಿರಲಿ, ಅವುಗಳು ಅಭಿವ್ರದ್ಧಿ ಹೊಂದಲಿ ಎನ್ನುವ ಆಶಯದೊಂದಿಗೆ ಹರಕೆ ರೂಪದಲ್ಲಿ ನಡೆಸಲಾಗುವ ಕ್ರೀಡೆ. ಧಾರ್ಮಿಕ ಕಟ್ಟುಕಟ್ಟಳೆ ಮುಖಾಂತರ ನಡೆಯುವ ಕಂಬಳ ಮನೋರಂಜನೆಯೊಂದಿಗೆ ಗ್ರಾಮೀಣ ಸೊಗಡನ್ನು ಸಾರುತ್ತದೆ.
        ಈ ಬಾರಿಯ ವಂಡಾರು ಕಂಬಳ ಸಂಭ್ರಮ ಸಡಗರದಿಂದ ಜರುಗಿತು. 150ಕ್ಕೂ ಹೆಚ್ಚು ಜೋಡಿ ಕೋಣಗಳ ಓಟ ನೆರೆದ ಸಾವಿರಾರು ಜನರನ್ನು ರಂಜಿಸಿತು.