.jpg)
ಸುತ್ತಮುತ್ತಲಿನ ಶಾಲಾ ಕಾಲೇಜುಗಳ ಸಹಸ್ರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕೆಸರು ಗದ್ದೆಯತ್ತ ಬಂದರು. ಭತ್ತದ ಸಸಿ, ನೇಜಿ ಕೀಳುವುದು, ನಾಟಿ, ಕೋಣಗಳ ಉಳುಮೆ, ಯಂತ್ರ ನಾಟಿ ಇತ್ಯಾದಿ ಪ್ರಾತ್ಯಕ್ಷಿತೆಗಳಲ್ಲಿ ಆಸಕ್ತಿಯಿಂದ ಪಾಲ್ಗೊಂಡ ವಿದ್ಯಾರ್ಥಿಗಳು, ತಮ್ಮ ಮನಸ್ಸಿನಲ್ಲಿ ಕೃಷಿಯ ಬಗೆಗಿನ ಆಸಕ್ತಿಯನ್ನು ತಣಿಸಿಕೊಂಡರು. ತಮ್ಮ ಮನೆಯಲ್ಲಿ ಸಾಕಷ್ಟು ಕೃಷಿ ಭೂಮಿ, ತೋಟ, ಗದ್ದೆ ಇದ್ದರೂ ಕೂಡಾ ಕೆಸರು ಗದ್ದೆಗೆ ಇಳಿಯದ ವಿದ್ಯಾರ್ಥಿಗಳು ಇಲ್ಲಿ ಕೆಸರು ಗದ್ದೆಗೆ ಇಳಿದರು. ಕೃಷಿಯಲ್ಲಿ ತಾವು ಪಾಲ್ಗೊಳ್ಳುವ ಮೂಲಕ ಸಂಭ್ರಮಿಸಿದರು. ನೇಜಿ ಗದ್ದೆಯಲ್ಲಿ ತುಂಬಿದ ಉತ್ಸಾಹದಿಂದ ಅನುಭವಿ ಕಾರ್ಮಿಕರ ಜೊತೆಗೆ ಭತ್ತದ ಸಸಿಗಳನ್ನು ಕಿತ್ತರು, ಛಾಪೆ ನೇಜಿಯ ನಾಟಿಯ ಕೌತುಕವನ್ನು ಕಣ್ಣು ತುಂಬಿಸಿಕೊಂಡರು. ಕೆಲವು ವಿದ್ಯಾರ್ಥಿಗಳು ಕೋಣಗಳ ಉಳಿಮೆಯಲ್ಲಿ ತಮ್ಮ ಕುತೂಹಲವನ್ನು ಓರೆಗೆ ಹಚ್ಚಿದರು. ನೇಗಿಲು ಹಿಡಿದು ಸಂತಷ ಪಟ್ಟರು.
ಮಕ್ಕಳಲ್ಲಿ ಕೃಷಿಯ ಆಸಕ್ತಿ ಮೂಡಿಸಲು ವಿವಿಧ ಸ್ಪರ್ಧೆಗಳನ್ನು ಕೆಸರು ಗದ್ದೆಯಲ್ಲಿ ಆಯೋಜಿಸಲಾಗಿತ್ತು. ಕೆಸರು ಗದ್ದೆ ಓಟ ಸಾಕಷ್ಟು ಗಮನ ಸಳೆದರೆ, ಹಗ್ಗ ಜಗ್ಗಾಟ ಮೊದಲಾದ ಕೆಸರು ಗದ್ದೆಯಲ್ಲಿ ನಡೆದ ಸ್ಫರ್ಧೆಯಲ್ಲಿ ವಿಧ್ಯಾರ್ಥಿಗಳು ತಮ್ಮ ಕ್ರೀಡಾ ಸಾಮಥ್ರ್ಯ ಬಿಂಬಿಸಿದರು. ಇಲ್ಲಿ ಸೋಲು ಗೆಲುವು ವಿದ್ಯಾರ್ಥಿಗಳಲ್ಲಿ ಮುಖ್ಯವಾಗಿರಲಿಲ್ಲ. ಕೆಸರು ಗದ್ದೆಯಲ್ಲಿ ನಲಿದಾಟದ ಮಜ ಅವರನ್ನು ತಾವು ಕಳೆದುಕೊಂಡ ಬಾಲ್ಯವನ್ನು ನೆನಪು ಮಾಡಿದವು. ಉಳುಮೆ ಮಾಡಿ ಹದ ಮಾಡಿದ ಗದ್ದೆಯಲ್ಲಿ ಮಕ್ಕಳ ಪಚ ಪಚ ಓಟ, ಬೀಳುವುದು, ಏಳುವುದು ಒಂಥರ ಮನೋರಂಜನೆ ಆಗಿಯೂ ಮೂಡಿ ಬಂತು.
.jpg)
ಭಾಗವಹಿಸಿದ ವಿದ್ಯಾರ್ಥಿಗಳಿಗೆಲ್ಲ ಗಿಡಗಳನ್ನು ಉಚಿತವಾಗಿ ನೀಡಲಾಯಿತು. ಗ್ರೀನ್ ಇಂಡಿಯಾ ಮೂಮೆಂಟ್ನ ಮುನಿಯಾಲ್ ಗಣೇಶ ಶೆಣೈ ಬಿಲ್ವ, ಶ್ರೀಗಂಧ ಮೊದಲಾದ ಗಿಡಗಳನ್ನು ನೀಡಿದರು. ಪ್ರತಿಯೊಂದು ಗಿಡದ ನಿರ್ವಹಣೆಯನ್ನು ವಿದ್ಯಾರ್ಥಿಗಳು ಪಾಲಿಸುವ ಮೂಲಕ ಹಸಿರು ಉಳಿಸುವಲ್ಲಿ ತಾವು ಪ್ರಮುಖ ಪಾತ್ರ ನಿರ್ವಹಿಸಬೇಕು ಎಂದು ಕಿವಿಮಾತು ನೀಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಕೆಸರಿಗಿಳಿದ ನೆನಪಾಗಿ ಗಿಡಗಳನ್ನು ಕೊಂಡೊಯ್ದರು.
ಕೈ ಕೆಸರಾದರೆ ಬಾಯಿ ಮೊಸರು ಎಂಬ ಶೀರ್ಷಿಕೆಯಲ್ಲಿ ರೋಟರಿ ಕ್ಲಬ್ ಕುಂದಾಪುರ ನೇತೃತ್ವದಲ್ಲಿ ಅನ್ಸ್ ಕ್ಲಬ್, ಶಿಕ್ಷಣ ಇಲಾಖೆ, ತೋಟಗಾರಿಕಾ ಇಲಾಖೆ ಹಾಗೂ ಹಸಿರು ಭಾರತ ಅಂದೋಲನ ಕಾರ್ಯಕರ್ತರ ಸಹಕಾರದೊಂದಿಗೆ ನಡೆದ ಕಾರ್ಯಕ್ರಮ, ಪ್ರಾತ್ಯಕ್ಷಿಕೆ, ಪರಿಚಯ, ಸ್ಪರ್ಧೆಗಳಿಂದ ಗಮನ ಸಳೆಯಿತು. ವಿಶಿಷ್ಠವಾದ, ಅಪರೂಪದ ಈ ಕಾರ್ಯಕ್ರಮ ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ನಡೆಯಿತು. ಇಕೋ ಕ್ಲಬ್, ಇಂಟರ್ಯಾಕ್ಟ್, ಎನ್.ಎಸ್.ಎಸ್., ಸ್ಕೌಟ್,ಗೈಡ್ಸ್ ಇತ್ಯಾದಿಗಳಿಗೆ ಒಳಪಟ್ಟ ವಿದ್ಯಾರ್ಥಿಗಳು ಭಾಗವಹಿಸಿದ್ದರು.
.jpg)
ವಿಶೇಷ ವರದಿ: ನಾಗರಾಜ್ ವಂಡ್ಸೆ ಕುಂದಾಪುರ
.jpg)
.jpg)