
ಮೊಬೈಲ್ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಆ್ಯಫ್ ನಲ್ಲಿ ನಮ್ಮ ಕುಂದಾಪುರ ಎಂಬ ಗ್ರೂಫ್ ರಚಿಸಿಕೊಂಡಿರುವ ಕೆಲವು ಕುಂದಾಪುರಿಗರು ಬರೀ ಮೇಸೆಜ್ ವಿನಿಮಯ ಮಾಡಿಕೊಳ್ಳುವುದಕ್ಕೆ ಸೀಮಿತವಾಗಿರದೇ ಅದರಿಂದಾಚೆಗೂ ಒಂದಿಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಲು ಹೊರಟು ಮಾದರಿಯಾಗಿದ್ದಾರೆ.
ಯಾವುದೇ ಪ್ರಚಾರವಿಲ್ಲದೇ ನಮ್ಮ ಕುಂದಾಪುರ ವಾಟ್ಸಆ್ಯಫ್ ಗ್ರೂಫ್ ನ ಮೂಖಾಂತರ ಒಂದಿಷ್ಟು ಹಣ ಸಂಗ್ರಹಿಸಿದ ಗ್ರೂಫ್ ಅಡ್ಮಿನ್ ಕುಂದಾಪುರ ದೃಷ್ಟಿ ಬ್ಯಾನರ್ಸ್ ನ ಸಂತೋಷ್ ಖಾರ್ವಿ, ಗ್ರೂಫ್ ನ ಕೆಲವು ಸದಸ್ಯರಾದ ಶ್ರೀಕಾಂತ್ ಕಾಮತ್, ಪ್ರಸನ್ನ ಶೇಟ್, ಉದಯ ಶೆಟ್ಟಿ ಅವರೊಂದಿಗೆ ಸೇರಿ ಇತ್ತಿಚಿಗೆ ಮರಣ ಹೊಂದಿದ ವಿದ್ಯಾರ್ಥಿನಿ ರತ್ನಾ ಕೊಠಾರಿಯವರ ಕುಟುಂಬ ಹಾಗೂ ಎರಡು ಬಡ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಬಸ್ಸಿನ ವೆಚ್ಚ ಭರಿಸುವುದಕ್ಕಾಗಿ ಧನ ಸಹಾಯ ಮಾಡಿ ಔದಾರ್ಯ ಮೆರೆದಿದ್ದಾರೆ.
► ಕೇವಲ ಗ್ರೂಫ್ ಮಾಡಿಕೊಂಡು ಸಮಯ ಹರಣ ಮಾಡದೇ ಒಂದಿಷ್ಟು ಜನಪರ ಕೆಲಸ ಮಾಡುವುದರಲ್ಲಿಯೇ ನಿಜವಾದ ಖುಷಿ ಅಡಗಿದೆ. ತೋರಿಕೆಗಾಗಿ ಈ ಕೆಲಸ ಮಾಡದೇ ನಿಜವಾದ ಕಾಳಜಿಯಿಂದ ಮಾಡಿದ್ದೇವೆ. ಸಹಕರಿಸಿದ ಗ್ರೂಫ್ ನ ಎಲ್ಲಾ ಸದಸ್ಯರಿಗೂ ಅಭಾರಿಯಾಗಿದ್ದೇನೆ. - ಸಂತೋಷ್ ಖಾರ್ವಿ, ನಮ್ಮ ಕುಂದಾಪುರ ವಾಟ್ಸಆ್ಯಫ್ ಗ್ರೂಫ್ ಅಡ್ಮಿನ್



ನಿಮ್ಮ ಅಭಿಪ್ರಾಯ ಬರೆಯಿರಿ
ಕುಂದಾಪ್ರ ಡಾಟ್ ಕಾಂ- editor@kundapra.com
Namma Kundapura WhatsApp group friends combinedly donated some amount to Late. Ratna Kotari's family and other 2 poor students