ಬೈಂದೂರಿನಲ್ಲಿ ಪ್ರಸಿದ್ಧ ಸಾಹಿತಿ ನಾ. ಡಿಸೋಜ

ಬೈಂದೂರು: ಪ್ರಸಿದ್ಧ ಸಾಹಿತಿ, 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವಾಧ್ಯಕ್ಷ ನಾ. ಡಿಸೋಜ 'ಬೈಂದೂರು ಡೈರೆಕ್ಟರಿ' ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬೈಂದೂರಿಗೆ ಆಗಮಿಸಿದ್ದು, ಕುಂದಾಪ್ರ ಡಾಟ್ ಕಾಂ  ಪರವಾಗಿ ಡಿಸೋಜ ದಂಪತಿಗಳನ್ನು ಸ್ವಾಗತಿಸಲಾಯಿತು.



ಬೈಂದೂರಿನ ಸೇನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ಮುಂದೆ ಕ್ಷಿತಿಜ ನೇಸರಧಾಮಕ್ಕೆ ತೆರಳಿದರು. ಪತ್ರಕರ್ತ ಶೇಖರ ಅಜೆಕಾರು, ಯೊನೆಸ್ಕೊ ಕ್ಲಬ್ ನ ನಾಗರಾಜ ಪಿ. ಯಡ್ತರೆ, ಪ್ರವೀಣ ಟಿ, ಪ್ರಸಾಸ್ ಯಡ್ತರೆ, ವಿವೇಕ ಮತ್ತು ಮಕ್ಕಳು ಜೋತೆಗಿದ್ದರು.

ನಿಮ್ಮ ಅಭಿಪ್ರಾಯ ಬರೆಯಿರಿ 
ಕುಂದಾಪ್ರ ಡಾಟ್ ಕಾಂ- editor@kundapra.com