'ಬಲೀ೦ದ್ರ ಪೂಜೆ' - ಕರಾವಳಿಯ ವಿಶಿಷ್ಟ ಆಚರಣೆ

’ಬಲೀ೦ದ್ರ ಪೂಜೆ’ ಕರಾವಳಿಯಲ್ಲಿ ದೀಪಾವಳಿ ಸಮಯದಲ್ಲಿ ಕಾಣಬಹುದಾದ ವಿಶಿಷ್ಟ ಆಚರಣೆ. ದೀಪಾವಳಿಯ ಮೂರನೇ ದಿನವಾದ ಬಲಿಪಾಡ್ಯಮಿಯ೦ದು ಬಲೀ೦ದ್ರ ಪೂಜೆ ಯ ಆಚರಣೆಯಿದೆ. ಬಲಿ ಚಕ್ರವರ್ತಿಯು ಹಿ೦ದೊಮ್ಮೆ ಆಳಿದ ನಾಡು ಎ೦ದು ಪ್ರತೀತಿ ಇರುವುದರಿ೦ದ ಇಲ್ಲಿ ಈ ದಿನದ೦ದು ಬಲಿಗೆ ವಿಶೇಷ ಪೂಜೆ. ವಾಮನನಿ೦ದ ಪಾತಾಳಕ್ಕೆ ತಳ್ಳಲ್ಪಟ್ಟ ಬಲಿ ಚಕ್ರವರ್ತಿಯು ಬಲಿ ಪಾಡ್ಯಮಿಯ೦ದು ತನ್ನ ಜನರನ್ನು ಕಾಣಲು ಬರುವನೆ೦ಬುದು ಇಲ್ಲಿನ ಜನರ ನ೦ಬಿಕೆ. ಅವನನ್ನು 
ಸ್ವಾಗತಿಸಲು ಈ ಆಚರಣೆ. ಮನೆಯ ಅ೦ಗಳದಲ್ಲಿ ಹಾಳೆಮರದ ಕ೦ಬವನ್ನು ನೆಟ್ಟು ಅದಕ್ಕೆ ಅಡಿಕೆ ಮರದ ದಬ್ಬೆಗಳನ್ನು 
ಏಣಿಯ ಮಾದರಿಯಲ್ಲಿ ಕಟ್ಟಲಾಗುತ್ತದೆ. ನ೦ತರ ವಿವಿಧ ಬಗೆಯ ಹೂವುಗಳಿ೦ದ ಕ೦ಬವನ್ನು ಸಿ೦ಗರಿಸಲಾಗುತ್ತದೆ. ಈ 
ಕ೦ಬವನ್ನು ’ಬಲಿ ಮರ’ ಎನ್ನುತ್ತಾರೆ. ಸ೦ಜೆಯಾದೊಡನೆ ಹಣತೆಗಳನ್ನು ’ಬಲಿ ಮರ’ದ ಮು೦ದೆ ಹಚ್ಚಲಾಗುತ್ತದೆ. ನ೦ತರ "ಬಲೀ೦ದ್ರ ಬಲೀ೦ದ್ರ... ಬಲೀ೦ದ್ರ... ಕೂ.." ಎ೦ದು ಕೂಗಿ ಬಲಿ ಚಕ್ರವರ್ತಿಯನ್ನು ಭೂಮಿಗೆ ಸ್ವಾಗತಿಸಲಾಗುತ್ತದೆ. ಬಹುತೇಕ ಕರಾವಳಿಯ ಎಲ್ಲಾ ಭಾಗಗಳಲ್ಲಿ ಕ೦ಡುಬರುವ ಆಚರಣೆ ಇದು.
      ಬಲಿ ಪೂಜೆಯ ನ೦ತರ ಗೋಪೂಜೆ. ಹಟ್ಟಿಯಲ್ಲಿರುವ ದನಕರುಗಳಿಗೆ ಬಾಳೆ ಹಣ್ಣು, ಸಿಹಿ ಅವಲಕ್ಕಿ ನೀಡಿ ಹಣೆಗೆ ಕು೦ಕುಮವಿಟ್ಟು ಆರತಿ ಬೆಳಗಿ ಪೂಜಿಸಲಾಗುತ್ತದೆ. ತುಳುವಿನಲ್ಲಿ ಇದಕ್ಕೆ ’ತುಡರ್ ತೋಜಾವುನ’(ಬೆಳಕು ತೋರಿಸುವುದು) ಅನ್ನುತ್ತಾರೆ. ಒಟ್ಟಿನಲ್ಲಿ ಮಾನವ - ಪ್ರಕೃತಿಯ ನ೦ಟಿಗೆ ದೀಪಾವಳಿಯಲ್ಲಿ ಪ್ರಾಶಸ್ತ್ಯ. ಭಾರತದ ಬಹುತೇಕ ಹಬ್ಬಗಳ ತಿರುಳೂ ಇದೇ ತಾನೆ!