'ಪರಿವರ್ತನೆ' - ವ್ಯಕ್ತಿತ್ವ ವಿಕಸನ ಉಪನ್ಯಾಸ

ಕುಂದಾಪುರ: ಇಲ್ಲಿನ ಕುಂದಾಪ್ರ ಡಾಟ್ ಕಾಂ ಅಂತರ್ಜಾಲ ಪತ್ರಿಕೆಯು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗಾಗಿ ’ಪರಿವರ್ತನೆ’ ಎಂಬ ವ್ಯಕ್ತಿತ್ವ ವಿಕಸನ ಉಪನ್ಯಾಸವನ್ನು ಹಮ್ಮಿಕೊಂಡಿದೆ. 
  ಫೆಬ್ರವರಿ 25ರ ಮಧ್ಯಾಹ್ನ 3ಗಂಟೆಗೆ ಜರುಗಲಿರುವ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ, ವಾಗ್ಮಿ ಓಂ ಗಣೇಶ್ ಉಪ್ಪುಂದ ವಿದ್ಯಾರ್ಥಿಗಳನ್ನುದ್ದೇಶಿಸಿ ಬದುಕು-ವ್ಯವಹಾರ-ಪಯಣ ಎಂಬ ವಿಷಯವಾಗಿ ಮಾತನಾಡಲಿದ್ದಾರೆ. 
    ಡಾ| ಬಿ. ಬಿ. ಹೆಗ್ಡೆ ಕಾಲೇಜಿನ ಪ್ರಾಂಶುಪಾಲರಾದ ಸೀಮಾ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಕಾಲೇಜಿನ ಎನ್.ಎಸ್.ಎಸ್ ಯೋಜನಾಧಿಕಾರಿ ಸುಧಾಕರ ಪಾರಂಪಳ್ಳಿ ಉಪಸ್ಥಿತರಿರುವರು. ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕುಂದಾಪ್ರ ಡಾಟ್ ಕಾಂ ನ ಸಂಪಾದಕ ಸುನಿಲ್ ಹೆಚ್. ಜಿ. ಬೈಂದೂರು ಕೋರಿದ್ದಾರೆ. 


 


  ಕಾರ್ಯಕ್ರಮದ ಬಗ್ಗೆ
    ಆಧುನಿಕತೆಯ ಮಾಯೆಯೊಳಗೆ ಕಳೆದುಹೋಗುತ್ತಿರುವ ವಿದ್ಯಾರ್ಥಿ ಸಮೂಹವು ಪದವಿ ಸರ್ಟಿಫಿಕೇಟ್ ಪಡೆಯುವುದೊಂದೇ ಜೀವನದ ಪರಮೋಚ್ಚ ಗುರಿ ಎಂದು ಭಾವಿಸಿದಂತಿದೆ. ನಿಜವಾದ ಶಿಕ್ಷಣವೆಂದರೆ ಸಾಮಾಜಿಕ ಪ್ರಜ್ಞೆಯನ್ನೂ, ಮಾನವೀಯ ಮೌಲ್ಯವನ್ನು ರೂಪಿಸಿಕೊಳ್ಳುವುದು; ವಾಸ್ತವಗಳೊಂದಿಗೆ ಸಮರ್ಥವಾಗಿ ವ್ಯವಹರಿಸುವುದು; ತನ್ನನ್ನು ತಾನು ಅರಿಯುವುದು ಇವೇ ಮುಂತಾದವುಗಳಾಗಿವೆ ಎಂಬುದನ್ನು ತಿಳಿಸುವ, ಆ ಮೂಲಕ ಸ್ವಸ್ಥ ಸಮಾಜವನ್ನು ಕಟ್ಟುವ ಕುಂದಾಪ್ರ ಡಾಟ್ ಕಾಂ ನ ಸಂಕಲ್ಪಕ್ಕೊಂದು ಮುನ್ನುಡಿ ಬರೆಯುವ  ಉದ್ದೇಶದಿಂದ ಹಮ್ಮಿಕೊಂಡ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ - ಪರಿವರ್ತನೆ.
    ಕುಂದಾಪ್ರ ತಾಲೂಕಿನ ಪ್ರತಿ ಕಾಲೇಜಿನಲ್ಲಿಯೂ ಈ ಕಾರ್ಯಕ್ರಮವನ್ನು ಆಯೋಜಿಸುವ ಗುರಿಯನ್ನು ಹೊಂದಲಾಗಿದೆ. ಡಾ| ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ನಿರೂಪಿಸಲಿದ್ದಾರೆ.

● To watch live on Youtube ► http://youtu.be/Zapmtk9hNTY

● To watch live on Kundapra.com ► http://j.mp/parivartane

●  To watch on Facebook page (Desktop)►http://bit.ly/FB-Parivarthane


ಕುಂದಾಪ್ರ ಡಾಟ್ ಕಾಂ- editor@kundapra.com