ಸಂಭ್ರಮದ ಈದ್-ಉಲ್-ಫಿತರ್

ಮುಸ್ಲಿ ಬಾಂಧವರು  ಒ೦ದು ತಿ೦ಗಳ ಕಾಲ ಕುರಾನನ್ನು ಪಟನಮಾಡಿ ಧರ್ಮದ ಬಗ್ಗೆ ತಿಳಿದುಕೊಳ್ಳುವುದರೊ೦ದಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ ಇ೦ದು ಈ ಉಪವಾಸವನ್ನು ಮುಕ್ತಾಯಗೊಳಿಸುವುದರೊ೦ದಿಗೆ ನಾಡಿನೆಲ್ಲೆಡೆಯಲ್ಲಿ ಈದ್-ಉಲ್-ಫಿತರ್ ಹಬ್ಬವನ್ನು  ಸಮಾಜದ ಬಾ೦ಧವರು ಭಕ್ತಿ-ಶೃದ್ದೆಯಿ೦ದ ಆಚರಿಸುತ್ತಿದ್ದಾರೆ.
      
 "ಪರಮ ದಯಾಪರನೂ, ಕರುಣಾನಿಧಿಯೂ ಆದ ಅಲ್ಲಾಹುವಿನ ನಾಮದಿಂದ ಸರ್ವಸ್ಥುತಿ. ಅವನು ಸಕಲ ವಿಶ್ವದ ಪ್ರಭು, ಪರಮ ದಯಾಳು, ಕರುಣಾನಿಧಿ, ನಿರ್ಣಾಯಕ ದಿನದ ಅಧಿಪತಿ, ನಾವು ನಿನ್ನನ್ನು ಮಾತ್ರ ಆರಾಧಿಸುತ್ತೇವೆ ಮತ್ತು ನನ್ನಿಂದ ಸಹಾಯ ಬೇಡುತ್ತೇನೆ. ನಮಗೆ ಸನ್ಮಾರ್ಗವನ್ನು ತೋರಿಸು, ನೀನು ಅನುಗ್ರಹಿಸಿದವರ ಮಾರ್ಗ, ನಿನ್ನ ಕ್ರೋಧಕ್ಕೆ ಪಾತ್ರರಾದವರ ಮಾರ್ಗ(ನೀನು ತೋರಿದ)ದಲ್ಲಿ ದಾರಿಯನ್ನು ತಪ್ಪಿ ನಡೆದವರ ಮಾರ್ಗವೂ ಅಲ್ಲ" ಎಂದು ಪ್ರಾರ್ಥನೆ ಮಾಡುತ್ತಾರೆ.

 ಜಕಾತ್(ಉಪವಾಸ): ಉಪ ಎಂದರೆ ಸಮೀಪ. ವಾಸ ಎಂದರೆ ಇರುವುದು. ಅಂದರೆ ಭಗವಂತನ ಹತ್ತಿರ ಇರುವುದನ್ನು ಉಪವಾಸ ಎನ್ನುವರು. ರಂಜಾನ್‌ನಿನ ಸಮಯದಲ್ಲಿ ಈ ಉಪವಾಸಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದೆ. ರಂಜಾನಿನಲ್ಲಿ ಒಂದು ತಿಂಗಳ ಕಾಲ ಉಪವಾಸ ಮಾಡುತ್ತಾರೆ. ಪ್ರತಿ ದಿನ ಬೆಳಗ್ಗೆ ಮಸೀದಿಯಿಂದ ಉಪವಾಸ ಮಾಡುತ್ತಾರೆ. ಪ್ರತಿದಿನ ಬೆಳಗ್ಗೆ ಮಸೀದಿಯಿಂದ ಆಜ್ಞೆ ಆದ ಕೂಡಲೇ ಅನ್ನ ನೀರನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಸಂಜೆ ಮಸೀದಿಯಿಂದ ಇಫ್ತಾರ್ ಕೊಟ್ಟ ಮೇಲೆ ನೀರು ಮತ್ತು ಕರ್ಜೂರವನ್ನು ಸೇವಿಸಿ ನಮಾಜ್‌ಗೆ ಹೋಗಬೇಕು ಹಾಗೂ ಜಗಳ ಗಲಾಟೆಯಿಂದ ದೂರ ಇರಬೇಕು. ಈ ಉಪವಾಸ ವ್ರತ ಇಂದ್ರಿಯಗಳ ನಿಗ್ರಹದ ಉದ್ದೇಶವಾಗಿದೆ. ಈ ಉಪವಾಸ ವ್ರತದಿಂದ ಹಸಿವು ಬಾಯಾರಿಕೆ ಕಷ್ಟಗಳನ್ನು ಅನುಭವಿಸುವ ಮೂಲಕ ಬಡವರ ಕಷ್ಟಗಳ ನೋವು ತಿಳಿಯುತ್ತದೆ ಹಾಗೂ ಪ್ರತಿಯೊಬ್ಬ ಶ್ರೀಮಂತ ವ್ಯಕ್ತಿಗೂ ಇದರ ಅರ್ಥ ತಿಳಿಯಬೇಕು ಎಂಬ ಉದ್ದೇಶವಿದೆ. 

ಝಕಾತ್(ದಾನ): ಇಸ್ಲಾಮ್ ಧರ್ಮದಲ್ಲಿ ದಾನಕ್ಕೆ ಝಕಾತ್ ಎನ್ನಲಾಗುತ್ತದೆ. ನಮಾಜ್ ನಂತರದ ಸ್ಥಾನ ಈ ಝಕಾತ್‌ಗೆ ಕೊಡಲಾಗಿದೆ. ಇದು ಇಸ್ಲಾಮಿನ ಅತಿ ಪ್ರಮುಖ ಆಧಾರ ಸ್ತಂಭವಾಗಿದೆ. ಪ್ರತಿಯೊಬ್ಬ ಮುಸ್ಲಿಮನು ತನ್ನ ಸ್ವತ್ತು, ಸಂಪತ್ತುಗಳ ಎರಡೂವರೆ ಶೇಕಡಾವನ್ನು ಪ್ರತಿ ವರ್ಷ ಬಡಬಗ್ಗರಿಗೆ, ದೀನ-ದಲಿತರಿಗೆ, ಸಾಲದಲ್ಲಿ ಮುಳುಗಿದವರಿಗೆ ಅಥವಾ ಧರ್ಮ ಕಾರ್ಯಗಳಿಗೆ ಕಡ್ಡಾಯಗಳಿಗೆ ನೀಡಲೇಬೇಕು. ಉತ್ತಮ ಸ್ಥಿತಿಯಿರುವ ಮುಸ್ಲಿಮರು ನಗದು, ವ್ಯಾಪಾರ, ಸರಕು ಬೆಳ್ಳಿ ಬಂಗಾರ ಇತ್ಯಾದಿಗಳ 40ನೇ ಒಂದಂಶವನ್ನು ಕೃತಕ ನೀರಾವರಿಯ ಕೃಷಿಕರಾದರೆ ಉತ್ಪನ್ನಗಳ ಇಪ್ಪತ್ತನೇ ಒಂದಂಶವನ್ನು ದಾನ ನೀಡಬೇಕು ಎಂಬ ನಿಯಮವಿದೆ. ಇವುಗಳೆಲ್ಲಾ ರಂಜಾನ್ ಸಮಯದಲ್ಲಿ ಆಗಬೇಕು.

       ಇ೦ದು ಮು೦ಜಾನೆ ವಿಶೇಷ ಸಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿ ಈದುಲ್ ಪಿತರ್ ಹಬ್ಬದ ಸ೦ದೇಶವನ್ನು ಪರಸ್ಪರ ವಿನಿಮಯ ಮಾಡಿಕೊ೦ಡರು.
  ಎಲ್ಲಾ ಮುಸ್ಲಿ ಬಾಂಧವರಿಗೂ ಈದುಲ್ ಪಿತರ್ ಹಬ್ಬದ ಶುಭಾಶಯಗಳು.
ಕುಂದಾಪ್ರ ಡಾಟ್ ಕಾಂ editor@kundapra.com