ಡಾ. ಬಿ. ಜಯಶ್ರೀಗೆ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ

ಕುಂದಾಪುರ: ಕಾರಂತ ಹುಟ್ಟೂರ ಪ್ರಶಸ್ತಿಯ ಸಂಭ್ರಮವನ್ನು ನನ್ನ ಜೀವನ ಚರಿತ್ರೆಯಲ್ಲಿ ದಾಖಲಿಸುತ್ತೇನೆ. ಕಾರಂತರ ಹೆಸರಿನ ಪ್ರಶಸ್ತಿಯನ್ನು ಗಳಿಸುವುದು ಸುಲಭ. ಈ ಪ್ರಶಸ್ತಿಯ ಗೌರವವನ್ನು ಉಳಿಸಿಕೊಳ್ಳುವುದು ಕಷ್ಟ. ಕಾರಂತರ ನೆನಪುಗಳ ಜತೆಗೆ ರಂಗಭೂಮಿಯಲ್ಲಿ ಇನ್ನು ಹೆಚ್ಚಿನ ಕೆಲಸವನ್ನು ಮಾಡುತ್ತೇನೆ ಎಂದು ನಟಿ, ಗಾಯಕಿ, ರಂಗಭೂಮಿ ಕಲಾವಿದೆ ಡಾ. ಬಿ. ಜಯಶ್ರೀ ಹೇಳಿದರು. ಕೋಟತಟ್ಟು ಗ್ರಾಮ ಪಂಚಾಯಿತಿ, ಡಾ.ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಆಶ್ರಯದಲ್ಲಿ ಗಿಳಿಯಾರು ಶಾಂಭವೀ ಶಾಲೆಯಲ್ಲಿ ಜರುಗಿದ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಕಾರಂತರ ಕಾದಂಬರಿಗಳಲ್ಲಿ ಅದ್ಭುತ ಕಲ್ಪನೆಗಳಿದ್ದವು. ಅವರ ಕಾದಂಬರಿಗಳನ್ನು ಓದಿದಾಗ ಮನಸ್ಸಿನಲ್ಲಿ ಹೊಸತನದ ಭಾವ ಮೂಡುತ್ತದೆ. ಅವರ ಕಾದಂಬರಿಗಳು ರಂಗದ ಮೇಲೆ ಬಂದಾಗ ಅದರಲ್ಲಿ ನಾನು ನಟಿಸಿದ್ದೇನೆ ಎನ್ನುವ ಹೆಮ್ಮೆ ನನಗಿದೆ ಎಂದರು.ನಾಡೋಜ ಕೆ.ಎಸ್.ನಿಸಾರ್ ಅಹಮದ್ ಕಾರಂತರ ಕುರಿತು ಸಂಸ್ಮರಣೆ ಭಾಷಣದಲ್ಲಿ ಕಾರಂತರು ಸಾಹಿತ್ಯ, ಸಂಸ್ಕೃತಿ, ವೆಜ್ಞಾನಿಕ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ ಮಹಾನ್ ಚೇತನ. ಕಾರಂತರ ವೆಚಾರಿಕಾ ವಿಚಾರದ ಕುರಿತು ವಿಚಾರ ಸಂಕಿರಣವನ್ನು ಈ ಭಾಗದಲ್ಲಿ ಏರ್ಪಡಿಸಬೇಕಾಗಿದೆ. ಆ ವಿಚಾರ ಸಂಕಿರಣದಲ್ಲಿ ನಾನು ಭಾಗವಹಿಸುತ್ತೇನೆ ಎಂದರು. ಮುಜರಾಯಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು ತಿಂಗಳಾಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ 3ನೇ ಹಣಕಾಸು ಆಯೋಗ ಅನುಷ್ಠಾನ ಸಮಿತಿಯ ಅಧ್ಯಕ್ಷ ಎ.ಜಿ ಕೊಡ್ಗಿ ಸಮಾರಂಭ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಗ್ರಾಮ ಪಂಚಾಯಿತಿ ಒಕ್ಕೂಟದ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ, ಉಡುಪಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಎ. ಪ್ರಭಾಕರ ಶರ್ಮ, ಕೋಟ ಜಿಲ್ಲಾ ಪಂಚಾಯಿತಿ ಸದಸ್ಯ ಸುನೀತಾ ರಾಜಾರಾಂ, ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಹಂದೆ ಉಪಸ್ಥಿತರಿದ್ದರು. ಕಾರಂತ ಹುಟ್ಟೂ ಪ್ರಶಸ್ತಿ ಪ್ರತಿಷ್ಠಾನದ ಅಧ್ಯಕ್ಷ ಆನಂದ ಸಿ. ಕುಂದರ್ ಸ್ವಾಗತಿಸಿದರು. ಪ್ರಮೋದ್ ಹಂದೆ ಪ್ರಾಸ್ತಾವನೆಗೆದರು. ಶ್ರೀಧರ ಹಂದೆ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಪ್ರಶಸ್ತಿ ಪತ್ರವನ್ನು ವಿಠಲ್ ವಿ.ಗಾಂವ್ಕರ್ ವಾಚಿಸಿದರು. ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭಕ್ಕೂ ಮುನ್ನ ಭವ್ಯವಾದ ಮೆರವಣಿಗೆಯು ಕೋಟತಟ್ಟು ಗ್ರಾಮ ಪಂಚಾಯಿತಿಯಿಂದ ಹೊರಟು ಕಾರಂತ ಸ್ಮಾರಕ ಕಲಾಭವನವನ್ನು ತಲುಪಿ ಶಾಂಭವೀ ಶಾಲಾ ವಠಾರಕ್ಕೆ ಸಾಗಿ ಬಂತು. ಸಮಾರಂಭದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮೂಲ್ಕಿ ಯುವ ವಾಹಿನಿ ಕಲಾವಿದರಿಂದ ತುಳುನಾಡ ವೆಭವ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.