ಪಂಚಗಂಗಾವಳಿ ನದಿಯಲ್ಲಿ ವಿಹಾರಿಸಿ, ಗಂಜಿ ಉಂಡ ಉಪಮುಖ್ಯಮಂತ್ರಿ ಆರ್.ಅಶೋಕ್

ಕುಂದಾಪುರ:  ನಾನಾ ಕಾರ್ಯಕ್ರಮದ ನಿಮಿತ್ತ ಕುಂದಾಪುರಕ್ಕೆ ಬಂದ ಉಪಮುಖ್ಯಮಂತ್ರಿ ಆರ್.ಅಶೋಕ್  ಇಲ್ಲಿನ ಬಿಜೆಪಿ ವತಿಯಿಂದ ಅಕ್ಷತಾ ಸಭಾಂಗಣದಲ್ಲಿ ಜರಗಿದ ಕಾರ್ಯಕರ್ತರ ಸಮಾವೇಶದಲ್ಲಿ ಗೌರವ ಸ್ವೀಕರಿಸಿದರು. ಶುಕ್ರವಾರ ರಾತ್ರಿ ಉಪಮುಖ್ಯಮಂತ್ರಿ ಆರ್.ಅಶೋಕ್ ಇಲ್ಲಿನ ಪಂಚಗಂಗಾವಳಿ ನದಿಯಲ್ಲಿ ಬೋಟಿಂಗ್ ನಡೆಸುವ ಮೂಲಕ ನದಿ ಹಾಗೂ ಸಮುದ್ರ ಸಂಗಮ ತಾಣದ ಸೌಂದರ್ಯ ಅಸ್ವಾದಿಸಿದರು.
ರಾತ್ರಿ ಕುಂದಾಪುರದ ಬ್ಲೂವಾಟರ್ ರೆಸಾರ್ಟ್‌ನಲ್ಲಿ ತಂಗಿದ್ದ ಉಪಮುಖ್ಯಮಂತ್ರಿ ಆರ್.ಅಶೋಕ್ ಶನಿವಾರ ಬೆಳಗ್ಗೆ ಪುರಸಭೆ ಸದಸ್ಯ ರವಿರಾಜ್ ಖಾರ್ವಿ ಮನೆಯಲ್ಲಿ ಗಂಜಿ ಊಟ ಸೇವಿಸಿದರು. ಇದೇ ಸಂದರ್ಭ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು. ಖಾರ್ವಿಕೇರಿ ನಿವಾಸಿಗಳೊಂದಿಗೆ ಮುಕ್ತವಾಗಿ ಬೆರೆತ  ಉಪಮುಖ್ಯಮಂತ್ರಿ ಅಲ್ಲಿನ ಕಷ್ಟ ಸುಖ ವಿಚಾರಿಸಿದರು. ಅವರೊಂದಿಗೆ ಬಿಜೆಪಿ ಬಿಜೆಪಿ ಹಿರಿಯ ಮುಖಂಡರಾದ ಎ.ಜಿ.ಕೊಡ್ಗಿ, ಮಾಣಿಗೋಪಾಲ್, ಬಿ.ಕಿಶೋರ್‌ಕುಮಾರ್, ರಾಜೇಶ್ ಕಾವೇರಿ, ಪ್ರಕಾಶ್ ಖಾರ್ವಿ ಸಾಥ್ ನೀಡಿದರು.