ಮರವಂತೆ ಗ್ರಾಮ ಪಂಚಾಯಿತಿಯ ಡಾ.ಪಿ.ದಯಾನಂದ ಪೆ ಪಂಚಾಯಿತಿ ಸೌಧ ಇತ್ತಿಚೆಗೆ ಉದ್ಘಾಟನೆಗೊಂಡಿತು.
ಕಟ್ಟಡವನ್ನು ದೇಣಿಗೆಯಾಗಿ ನಿಡಿದ ಬೆಂಗಳೂರು ಸೆಂಚುರಿ ಬಿಲ್ಡರ್ಸ್ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಪಿ.ದಯಾನಂದ ಪೈ ಉದ್ಘಾಟಿಸಿ ಮಾತನಾಡಿ ಸ್ವಾತಂತ್ರ್ಯ ಬಂದು 6 ದಶಕಗಳೇ ಕಳೆದರೂ ಇನ್ನೂ ಶೇ.40ರಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುವುದು ವಿಷಾದನೀಯ. ಮಗುವಿಗೆ ಉತ್ತಮ ಶಿಕ್ಷಣ ನೀಡುವುದೇ ನಾವು ಸಮಾಜಕ್ಕೆ ನೀಡುವ ದೊಡ್ಡ ಸೇವೆ. ದೇಶ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿದಾಗ ಮಾತ್ರ ಬಡತನ ನಿರ್ಮೂಲನೆ ಸಾಧ್ಯ ಎಂದರು.
ಜನರಿಂದ ಚುನಾಯಿತರಾದ ಜನಪ್ರತಿನಿಧಿಗಳು ಜನರ ಸೇವೆ ಮಾಡಬೇಕು. ಸರಕಾರ ಗ್ರಾಮಾಭಿವದ್ಧಿಯ ಚಿಂತನೆಯಿಂದ ಬಜೆಟ್ನಲ್ಲಿ ಹಲವಾರು ಯೋಜನೆಗಳನ್ನು ಕೆಗೊಂಡರು ಸಹ, ಮಧ್ಯವರ್ತಿಗಳ ಹಾವಳಿಯಿಂದಾಗಿ ಶೇ.5ರಷ್ಟು ಜನರಿಗೆ ಮಾತ್ರ ಅದು ತಲುಪುತ್ತಿದೆ ಎಂದರು.
ಗ್ರಾ.ಪಂ. ಅಧ್ಯಕ್ಷ ಎಸ್. ಜನಾರ್ದನ ಅಧ್ಯಕ್ಷತೆ ವಹಿಸಿದ್ದರು. ಮೋಹಿನಿ ಡಿ. ಪೆ, ಉದ್ಯಮಿ ವಿ.ಕೆ ಕಾಮತ್,ಜಯ ವಿ. ಕಾಮತ್, ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಆಚಾರ್ ಉಪಸ್ಥಿತರಿದ್ದರು. ಡಾ.ಪಿ. ದಯಾನಂದ ಪೆ ದಂಪತಿ, ಉದ್ಯಮಿ ವಿ.ಕೆ. ಕಾಮತ್ ದಂಪತಿ ಹಾಗೂ ಗುತ್ತಿಗೆದಾರ ಉದಯ ಆಚಾರ್ ಅವರನ್ನು ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು. ಪಂಚಾಯಿತಿ ಅಭಿವದ್ಧಿ ಅಧಿಕಾರಿ ಹರೀಶ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಗ್ರಾ.ಪಂ.ಮಾಜಿ ಅಧ್ಯಕ್ಷ ವಿನಾಯಕ ರಾವ್ ವಂದಿಸಿದರು.
ಕುಂದಾಪ್ರ.ಕಾಂ- editor@kundapra.com