ಜಾಗತೀಕರಣದಿಂದಾಗಿ ದೇಶಿ ಭಾಷೆಗಳಿಗೆ ಕುತ್ತು: ಪ್ರೊ. ಎ.ವಿ. ನಾವಡ

ಬೈಂದೂರು: ಜಾಗತೀಕರಣದ ಕಾರಣದಿಂದಾಗಿ ಆಂಗ್ಲ ಭಾಷೆಯೆಡೆಗಿನ ವ್ಯಾಮೋಹ ಹೆಚ್ಚಾಗುತ್ತಿದ್ದು ಪರಿಣಾಮವಾಗಿ ದೇಶಿ ಭಾಷೆಗಳು ಅವಸಾನದ ಅಂಚನ್ನು ತಲುಪಬಹುದು ಎಂದು ಹಂಪಿ ವಿ.ವಿ. ಪ್ರಸಾರಂಗ ವಿಭಾಗದ ನಿವತ್ತ ಮುಖ್ಯಸ್ಥ ಹಾಗೂ ಸಂಶೋಧಕ ಪ್ರೊ. ಎ.ವಿ. ನಾವಡ ಆತಂಕ ವ್ಯಕ್ತಪಡಿಸಿದರು. 
       ಬೈಂದೂರಿನ ರಾಜರಾಜೇಶ್ವರಿ ಕಲಾಮಂದಿರದ ಮೊಗೇರಿ ಗೋಪಾಲಕಷ್ಣ ಅಡಿಗರ ವೇದಿಕೆಯಲ್ಲಿ ನಡೆದ 12ನೇ ಕುಂದಾಪುರ ತಾಲೂಕು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
             ಆಂಗ್ಲ ಭಾಷಾ ಇಂತಹ ಶಿಕ್ಷಣ ಮಾತ್ರ ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುತ್ತದೆ ಎಂಬ ಪೋಷಕರ ತಪ್ಪು ಕಲ್ಪನೆಯಿಂದಾಗಿ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳನ್ನು ಆಂಗ್ಲ ಮಾಧ್ಯಮದ ಶಿಕ್ಷಣವನ್ನು ನೀಡಲು ಅವರು ಒಲವು ತೋರುತ್ತಿದ್ದಾರೆ. ಇಂದು ಕನ್ನಡಕ್ಕೆ ಕುತ್ತು ಬಂದಿದ್ದು, ಅದನ್ನು ಹೋಗಲಾಡಿಸಲು ಕನ್ನಡಾಭಿಮಾನಿಗಳು ರಕ್ಷಣಾತ್ಮಕ    ವ್ಯೂಹವನ್ನ ರಚಿಸಿ ಸಮಾಜದಲ್ಲಿ ಮಾತ ಭಾಷೆಯಲ್ಲಿ ಮಾತನಾಡುವಂತೆ ಪೂರಕ ವಾತವರಣವನ್ನು ಸಷ್ಟಿಸಬೇಕು ಎಂದರು. 
          ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಮಾತನಾಡಿ ಮಕ್ಕಳಿಗೆ ಮಾತ ಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣವಿರಬೇಕೇನ್ನು ವುದು ಸಾಹಿತಿಗಳ ಒಕ್ಕೋರಲ ಧ್ವನಿಯಾಗಿದ್ದರು, ಸರ್ಕಾರ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕೆಗೊಂಬೆಯಾಗಿ ಕೆಲಸಮಾಡುತ್ತಿರುವುದು ವಿಷಾದಕರ ಸಂಗತಿಯಾಗಿದೆ. ಪ್ರತಿ ಹಳ್ಳಿಗಳಲ್ಲಿಯೂ ಆಂಗ್ಲ ಮಾಧ್ಯಮ ಶಾಲೆಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿದ್ದು, ಮುಂದೊಂದು ದಿನ ಕನ್ನಡ ಶಾಲೆ ಇಲ್ಲದಂತಾಗಬಹುದು ಎಂದು ಅವರು ಹೇಳಿದರು. 
       ತಾಲೂಕು ಕ.ಸಾ.ಪ. ಅಧ್ಯಕ್ಷ ಕುಂದಾಪುರ ನಾರಾಯಣ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಕ್ಷೇತ್ರ ಶಿಕ್ಪ್ಷೃಣಾಧಿಕಾರಿ ಗೋಪಾಲ ಶೆಟ್ಟಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಸಮ್ಮೇಳನಾಧ್ಯಕ್ಷ ಯು. ಚಂದ್ರಶೇಖರ ಹೊಳ್ಳ, ಜಿಲ್ಲಾ ಕ.ಸಾ.ಪ. ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಪ್ರತಿಭಾ ಪುರಸ್ಕಾರ ಪಡೆದ ಆಶಾವೀಣಾ ಡಯಾಸ್, ಸಮ್ಮೇಳನದ ಕಾರ್ಯಾಧ್ಯಕ್ಷ ಜಯಾನಂದ ಹೋಬಳಿದಾರ್ ಉಪಸ್ಥಿತರಿದ್ದರು. 
      ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ಯು.ಚಂದ್ರಶೇಖರ ಹೊಳ್ಳ ದಂಪತಿಯನ್ನು, ಸ್ವಾಗತ ಸಮಿತಿಯ ಕಾರ್ಯಾದ್ಯಕ್ಷ ಜಯಾನಂದ ಹೋಬಳಿದಾರ್ ದಂಪತಿಯನ್ನು, ರಾಜ್ಯ ಕ.ಸಾ.ಪ. ಅಧ್ಯಕ್ಷ ಪುಂಡಲೀಕ ಹಾಲಂಬಿ, ಜಿಲ್ಲಾ ಕ.ಸಾ.ಪ. ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ತಾಲೂಕು ಕ.ಸಾ.ಪ ಅಧ್ಯಕ್ಷ ಕುಂದಾಪುರ ನಾರಾಯಣ ಖಾರ್ವಿ ಹಾಗೂ ಬೈಂದೂರು ಹೋಬಳಿ ಕ.ಸಾ.ಪ. ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಇವರನ್ನು ಸನ್ಮಾನಿಸಲಾಯಿತು. 
     ಬೈಂದೂರನ್ನು ತಾಲೂಕನ್ನಾಗಿ ಸರ್ಕಾರ ಘೋಷಣೆ ಮಾಡಬೇಕು, ನವ್ಯ ಕವಿ ಗೋಪಾಲಕಷ್ಣ ಅಡಿಗರ ಹುಟ್ಟೂರಾದ ಮೊಗೇರಿಯಲ್ಲಿ ಸ್ಮಾರಕಭವನ ವನ್ನು ನಿರ್ಮಿಸಬೇಕು ಹಾಗೂ ಕುಂದಾಪುರದ ಭಾಷೆಯಾದ ಕುಂದಗನ್ನಡಕ್ಕೆ ಅಕಾಡೆಮಿಯನ್ನು ಮಾಡಬೇಕೆಂಬ ಮೂರು ನಿರ್ಣಯಗಳನ್ನು ಕೈಗೊಳ್ಳ ಲಾಯಿತು. ಡಾ.ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ಸತೀಶ ಎಂ. ಬೈಂದೂರು ಮತ್ತು ಚಂದ್ರ ಕೆ. ಹೆಮ್ಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಗಣಪತಿ ಹೋಬಳಿದಾರ್ ವಂದಿಸಿದರು. 


ಕುಂದಾಪ್ರ.ಕಾಂ- editor@kundapra.com