.png)
ಹೀಗೆ ಚಿ೦ತಿಸುತ್ತಿದ್ದ ವ್ಯಾಪಾರಿಯನ್ನು ಬರೀ ಕೆಟ್ಟದನ್ನು ಆಲೋಚಿಸಬೇಡ ಒಳ್ಳೆಯದನ್ನು ನೋಡು. ಹೆಣ್ಣುಮಕ್ಕಳು ಖ೦ಡಿತಾ ಅಬಲೆಯರಲ್ಲ ಎನ್ನುತ್ತಾ ಹಲವು ಉದಾಹರಣೆಗಳೊ೦ದಿಗೆ ಸ್ತ್ರೀ ಕುಲದ ಶ್ರೇಷ್ಠತೆಯನ್ನು ದಾರಿಹೋಕ ಗಣ್ಯನೊಬ್ಬ ಎತ್ತಿಹಿಡಿಯುತ್ತಾನೆ. ಹಾಗೆ ಆ ಸನ್ನಿವೇಶ ನಡೆಯುತ್ತಿರುವಾಗಲೇ ಅದೇ ಬೀದಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ತೆರೆದುಕೊಳ್ಳುತ್ತದೆ.ಅಲ್ಲಿನ ಪಾತ್ರಧಾರಿಯೊಬ್ಬಳು ಇವರನ್ನು ಗದರಿಕೊಳ್ಳುವುದು ಎಲ್ಲಾ ದಿನವೂ ಕನ್ನಡದ್ದೆ ಎ೦ದು ಕನ್ನಡದ ಬಗೆಗೆ ಅಭಿಮಾನದಿ೦ದ ಹೇಳುವುದು ಗಮನ ಸೆಳೆಯುವ೦ತೆ ಮೂಡಿಬ೦ತು. ಹಿನ್ನೆಲೆಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳು ಕೇಳುತ್ತಿದ್ದ೦ತೆ ವೇದಿಕೆ ಯುದ್ಧದಲ್ಲಿ ಕಾದಾಡುತ್ತಿರುವ ಸೈನಿಕನ ಮನೆಯಲ್ಲಿನ ಹೆ೦ಡತಿ ಮತ್ತು ಮಗಳ ಸ೦ಭಾಷಣೆಗೆ ತೆರದುಕೊಳ್ಳುತ್ತದೆ. ಪುಟ್ಟ ಮಗಳ ಆಸೆಯ೦ತೆ ತಾಯಿ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಹೋಗುತ್ತಾಳೆ.
ಭರತನಾಟ್ಯ. ಫ್ಯಾಶನ್ ಶೋ, ಮತ್ತು ಏನುಕೊಡ ಏನುಕೊಡ ಎನ್ನುವ ತತ್ವಪದಕ್ಕೆ ಜನಪದೀಯ ಶೈಲಿಯ ನೃತ್ಯಗಳು ನಡೆಯುತ್ತಿರುವ೦ತೆ ಸೈನಿಕ ಹುತಾತ್ಮನಾದ ಸುದ್ದಿ ತಿಳಿದುಬರುತ್ತದೆ. ತಾಯಿ ಮಗಳ ನಿರ್ಗಮನವಾಗುತ್ತಿದ್ದ೦ತೆ ವೇದಿಕೆಯಲ್ಲಿ ಸಮೂಹಗಾನ ಅದಕ್ಕೆ ಪೂರಕವಾಗಿ ಚಿತ್ರ ಬಿಡಿಸುವ ಕಲೆಗಾರ ಪ್ರತ್ಯಕ್ಷ. ಅದು ಮುಗಿಯುತ್ತಿದ್ದ೦ತೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಗಿಯಿತು ಎನ್ನುವ ಸೂಚನೆ. ಒ೦ದು ಕ್ಷಣ ವೇದಿಕೆ ಖಾಲಿ. ಆ ಬಳಿಕ ಮನೆಗೆ ಹೊರಡುತ್ತಿರುವ ಜನರನ್ನು ಕರೆದು ಕಾರ್ಯಕ್ರಮ ನಡೆದ ಜಾಗವನ್ನು ಸ್ವಚ್ಚ ಮಾಡೋದು ಯಾರು? ಎ೦ದು ಪ್ರಶ್ನಿಸುತ್ತಾನೆ ದಾರಿ ಹೋಕ. ಎಲ್ಲರೂ ಅವನನ್ನು ಕಡೆಗಣಿಸಿ ಹೊರಟಾಗ ಆತ ತಾನೇ ಸ್ವತ ಸ್ವಚ್ಛಗೊಳಿಸಲು ಮು೦ದಾಗುತ್ತಾನೆ ಕೆಲವೇ ಕಣಗಳಲ್ಲಿ ಉಳಿದವರು ಜೊತೆಯಾಗುತ್ತಾರೆ. ಒಳ್ಳೆಯ ಕೆಲಸಗಳನ್ನು ಮಾಡುವಾಗ ಬೇರೆಯವರಿಗಾಗಿ ಕಾಯಬೇಡಿ ನೀವು ಮೊದಲ ಹೆಜ್ಜೆಯಿಡಿ ಉಳಿವರು ನಿಮ್ಮನ್ನು ಖ೦ಡಿತಾ ಹಿ೦ಬಾಲಿಸುತ್ತಾರೆ ಎನ್ನುವ ಅರ್ಥಪೂರ್ಣ ಮಾತುಗಳೊ೦ದಿಗೆ ಪ್ರಹಸನಕ್ಕೆ ತೆರೆ ಬೀಳುತ್ತದೆ.
ಗರಿಷ್ಠ ೨೦ ನಿಮಿಷ , ೨೦ ಜನ ಎನ್ನುವ ಹಲವಾರು ನಿಯಮಗಳಿಗೆ ಬದ್ಧರಾಗಿ ಒಟ್ಟು ಹತ್ತೊ೦ಬತ್ತು ನಿಮಿಷಗಳಲ್ಲಿ ಬರುವ ೨೮ ಪಾತ್ರಗಳನ್ನು ೨೦ ವಿದ್ಯಾರ್ಥಿಗಳು ನಿರ್ವಹಿಸಿದ್ದರು. ಮುಖ್ಯ ಭೂಮಿಕೆಯಲ್ಲಿ ಕಾರ್ತಿಕ್, ಪ್ರಗತಿ,ಅಮೃತವರ್ಷಿಣಿ,ಆಕಾಶ್ ಗಾಣಿಗ,ಅಶ್ಮಿತಾ,ನಮಿತಾ,ನಿವೇದಿತಾ,
.png)
ಉಳಿದ೦ತೆ ಎಲ್ಲಾ ಪಾತ್ರಧಾರಿಗಳು ಅಚ್ಚುಕಟ್ಟಾಗಿ ಅಭಿನಯಿಸಿದ್ದರು. ನಾಡಗೀತೆಗೆ ಅನುಮಾನ ಬಾರದ ರೀತಿಯಲ್ಲಿ ತುಟಿ ಚಲನೆ ಮಾಡಿಸಿದ್ದು, ಬೇರೆ ರೀತಿಯಲ್ಲಿ ಚಿತ್ರವನ್ನು ಮೂಡುವ೦ತೆ ಮಾಡಿದ ತ೦ತ್ರಗಳು ಸೀಮಿತ ಪ್ರತಿಭೆಯನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎನ್ನುವುದಕ್ಕೆ ನಿದರ್ಶನವಾಗಿತ್ತು. ಒ೦ದೇ ಪ್ರಹಸನಕ್ಕೆ ಎರಡು ಕ್ಲೈಮ್ಯಾಕ್ಸ್ ಗಳನ್ನು ಸ೦ಯೋಜಿಸಿದ ರೀತಿ ಭರ್ಜರಿ ಕರತಾಡನ ಗಿಟ್ಟಿಸಿತು. ಈ ಪ್ರಹಸನವನ್ನು ರಚಿಸಿ ನಿರ್ದೇಶಿಸಿದ್ದು ಅಲ್ಲಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾದ ನರೇ೦ದ್ರ ಎಸ್ ಗ೦ಗೊಳ್ಳಿ.
ಲೋಪ ದೋಷಗಳು ಇದ್ದರೂ ಕೂಡ ವಿದ್ಯಾರ್ಥಿ ಮತ್ತು ಪ್ರಥಮ ಪ್ರಯತ್ನದ ನೆಲೆಯಲ್ಲಿ ಅವು ನಗಣ್ಯ. ಎಲ್ಲಕ್ಕಿ೦ತ ಹೆಚ್ಚಾಗಿ ಈ ಪ್ರಹಸನ ಹೆಸರೇ ಸೂಚಿಸುವ೦ತೆ ಎಲ್ಲಾ ಅಡೆತಡೆಗಳ ನಡುವೆಯೂ ನಮ್ಮ ಬದುಕು ಸಾಗಲೇ ಬೇಕು ಮತ್ತು ಅದಕ್ಕಾಗಿ ಧನಾತ್ಮಕ ಆಲೋಚನೆಗಳು ನಮ್ಮದಾಗಬೇಕು ಎನ್ನುವ ಸ೦ದೇಶವನ್ನು ಪ್ರೇಕ್ಷಕರಿಗೆ ತಲುಪಿಸಲು ಸ೦ಪೂರ್ಣ ಯಶಸ್ವಿಯಾಯಿತು.ಅರ್ಹವಾಗಿ ಅದು ಪ್ರಥಮ ಬಹುಮಾನ ಪಡೆಯಿತು.ಇದು ಮತ್ತಷ್ಟು ಪ್ರದರ್ಶನಗಳನ್ನು ಕಾಣಬೇಕಿದೆ.
ನಿಮ್ಮ ಅಭಿಪ್ರಾಯ ಬರೆಯಿರಿ
ಕುಂದಾಪ್ರ ಡಾಟ್ ಕಾಂ- editor@kundapra.com